ಬಿಗ್ ಬ್ರೇಕಿಂಗ್: ನಮೋ ’ಅನ್ನದಾತರಿಗೆ’ ಬಂಪರ್ ಕೊಡುಗೆ ನೀಡಲಿದ್ದಾರೆ. ಅನ್ನದಾತರಿಗೆ ನಮೋ ನೀಡುತ್ತಿರುವ ಬಂಪರ್ ಕೊಡುಗೆಯಾದರು ಯಾವುದು ಗೊತ್ತೆ???
ಭಾರತದ ಜನಪ್ರಿಯ ಪ್ರಧಾನಿ ನರೇಂದ್ರ ಮೋದಿಯವರು ಕೇವಲ ಕೈಗಾರಿಕ ಉದ್ಯಮಿಗಳ ಪರವಾಗಿದ್ದಾರೆ ಅನ್ನದಾತರನ್ನು ಕಡೆಗಣಿಸುತ್ತಿದ್ದಾರೆ ಎಂದು ವಿಪಕ್ಷಗಳು ಮೋದಿಯವರ ವಿರುದ್ದ ಟೀಕೆ ಮಾಡುತ್ತಿದ್ದರು. 2022ರ ಒಳಗಾಗಿ ಅನ್ನದಾತರ ಆದಾಯವನ್ನು ದ್ವಿಗುಣಗೊಳಿಸಲಾಗುವುದು ಎಂದು ಮೋದಿಯವರು ಹಲವಾರು ಕಾರ್ಯಕ್ರಮಗಳಲ್ಲಿ ಹೇಳಿದ್ದಾರೆ. ಅದಕ್ಕೆ ಪೂರಕವಾಗಿ ಹಲವಾರು ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ.
ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿರುವ ನರೇಂದ್ರ ಮೋದಿಯವರು ಇಂದು ಅನ್ನದಾತರಿಗೆ ಬಂಪರ್ ಕೊಡುಗೆಯನ್ನು ಘೋಷಿಸುವ ಸಾಧ್ಯತೆ ಇದೆ.ಕಳೆದ ಶುಕ್ರವಾರ ದೇಶದ ಕಬ್ಬು ಬೆಳೆಗಾರರ ಜೊತೆಗೆ ನಡೆದ ಸಭೆಯಲ್ಲಿ ರೈತರ ಆದಾಯ ದ್ವಿಗುಣಗೊಳಿಸುವ ಉದ್ದೇಶದಿಂದ ಎಲ್ಲಾ ಬೆಳೆಗಳಿಗೆ ಬೆಂಬಲ ಬೆಲೆಯನ್ನು ಘೋಷಿಸುವುದಾಗಿ ತಿಳಿಸಿದ್ದಾರು. ಈ ಕುರಿತು ಇಂದು ದೆಹಲಿಯಲ್ಲಿ ಕೇಂದ್ರ ಆರ್ಥಿಕ ವ್ಯವಹಾರಗಳ ಸಭೆ ನಡೆಯಲ್ಲಿದ್ದು ಅಕ್ಕಿ, ಗೋಧಿ, ರಾಗಿ ಇನ್ನಿತರ ಬೆಳೆಗಳಿಗೆ ಬೆಂಬಲ ಬೆಲೆಯನ್ನು ಘೋಷಿಸುವ ಸಾಧ್ಯತೆ ಹೆಚ್ಚಿದೆ. ಈ ಮುಖಾಂತರ ನಮೋ ಅನ್ನದಾತರ ಪರವಾಗಿದ್ದರೆ ಎಂದು ಮತ್ತೋಮ್ಮೆ ಸಬೀತಾಗಿದೆ.

Comments
Post a Comment